ರಾಗ: ಶಂಕರಾಭರಣ
ತಾಳ: ಛಾಪುತಾಳ
ಅಂಧಂತಮಸು ಇನ್ಯಾರಿಗೆ ಗೋ
ವಿಂದನ ನಿಂದಿಸುವರಿಗೆ || ಪ ||
ಸಂದೇಹವಿಲ್ಲವು ಸಾರಿಸಾರಿಗೆ ವಾಯು
ನಂದನಗೊಂದಿಸದವರಿಗೆ || ಅ ಪ ||
ಮಾತುಮಾತಿಗೆ ಹರಿಯ ನಿಂದಿಸಿ ಸ
ರ್ವೋತ್ತಮ ಶಿವನೆಂದು ವಂದಿಸಿ
ಧಾತುಗ್ರಂಥಗಳೆಲ್ಲ ತೋರಿಸಿ ವೇ
ದೋಕ್ತ ಪ್ರಮಾಣಂಗಳ್ಹಾರಿಸಿ
ಸೋತು ಸಂಕಟಬಟ್ಟು ಪಾತಕೊಡಲೋಳಿಟ್ಟು
ನೀತಿ ಹೇಳುವಕೆಟ್ಟ ಜಾತಿಗಳಿಗಲ್ಲದೆ || ೧ ||
ಮೂಲಾವತಾರಕ್ಕೆ ಭೇದವು ಮುಖ್ಯ
ಶೀಲ ಪಂಡಿತರೊಳಗೆ ವಿವಾದವು
ಲೀಲಾ ಸಾದೃಶ್ಯವ ತೋರುತ
ಮೇಲೆ ಲಿಂಗಭಂಗವಿಲ್ಲದ ದೇಹ ಹಾರುತ
ಮೂಲ ಗುರುವು ಕುಂತೀಬಾಲನೆನ್ನದೆ ವೃಥಾ
ಶೀಲಗೆಟ್ಟ ದುಶ್ಯೀಲರಿಗಲ್ಲದೆ || 2 ||
ಬ್ಯಾಸರ ಮಾತುಗಳಾಡುತ ವಿ
ಶ್ವಾಸ ಘಾತಕನ ಮಾಡುತ
ದೋಷವೆಂದರು ನುಡಿಕೇಳದೆ ಸಂ
ತೋಷವೆಂದು ತಾನು ಬಾಳದೆ
ಶೇಷಶಯನ ಸಿರಿ ಆದಿಕೇಶವರಾಯನ
ದಾಸರೊಡನಾಡದ ಮಧ್ವದ್ವೇಷಿಗಳಿಗಲ್ಲದೆ || 3 ||
Like this:
Like Loading...
Related
Published